ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರಿಂದ ದೂರವಿರಲು ಮಾಧ್ಯಮಗಳಿಗೆ ಮನವಿ

Last Updated 25 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ತಂಡದ ಆಟಗಾರರನ್ನು ಸಂದರ್ಶನ ನೀಡುವಂತೆ ಮಾಧ್ಯಮಗಳು ಒತ್ತಾಯಿಸಬಾರದು. ಇದರಿಂದ ತಂಡದ ಆಟಗಾರರ ಏಕಾಗ್ರತೆಗೆ ಭಂಗವುಂಟಾಗುತ್ತಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದೆ.

ಈ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್, ‘ಮಾಧ್ಯಮ ಪ್ರತಿನಿಧಿಗಳು ತಂಡದ ಆಟಗಾರರಿಗೆ ಮೊಬೈಲ್ ಕರೆ ಮತ್ತು ಎಸ್‌ಎಂಎಸ್ ಮೂಲಕ ಸಂದರ್ಶನ ಮತ್ತು ವಿಡಿಯೋ ಕ್ಲಿಪ್‌ಗಾಗಿ ಕೇಳುತ್ತಿದ್ದಾರೆ. ವಿಶ್ವಕಪ್ ಗೆಲುವಿನತ್ತ ದೃಷ್ಟಿ ನೆಟ್ಟಿರುವ ಭಾರತದ ಆಟಗಾರರ ಚಿತ್ತವನ್ನು ಇದು ಕದಡಬಾರದು. ಆದ್ದರಿಂದ ಮಾಧ್ಯಮಗಳು ಸಹಕರಿಸಬೇಕು’ ಎಂದು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT