ಮನಿಷಾ ಕೊಯಿರಾಲಾ ಆತ್ಮಕಥೆ ಬರೆಯುವ ನಿರ್ಧಾರವನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ. ಕಳೆದ ಡಿಸೆಂಬರ್ 10ರಂದು ಅಂಡಾಶಯ ಸಂಬಂಧಿ ಕ್ಯಾನ್ಸರ್ನಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರ `ಕೀಮೋಥೆರಪಿ' ಚಿಕಿತ್ಸಾ ಸರಣಿ ಪ್ರಾರಂಭವಾಗಿದೆ.
ಅವರು ನಂಬಿರುವ ಗುರು ನಮನ್ ಎಂಬುವರನ್ನು ಉದ್ದೇಶಿಸಿ ಮನಿಷಾ ಫೇಸ್ಬುಕ್ ಅಕೌಂಟ್ನಲ್ಲಿ ಕೆಲವು ಸಾಲುಗಳನ್ನು ಬರೆದಿದ್ದಾರೆ. ಶಾಪದಿಂದಲೋ, ತಾನೇ ತಾನಾಗಿಯೋ ಅಂತೂ ಆತ್ಮಕಥೆ ಬರೆಯುವ ಮನಸ್ಸಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನಲವತ್ತೆರಡು ವಯಸ್ಸಿನ ನಟಿ ಬಾಲಿವುಡ್ ಚಿತ್ರಗಳಲ್ಲದೆ ನೇಪಾಳ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಮ್ಗೋಪಾಲ್ ವರ್ಮಾ ನಿರ್ದೇಶನದ `ಭೂತ್ ರಿಟರ್ನ್ಸ್' ನಂತರ ಅವರು ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.
`ನಾನು ಕಷ್ಟ ಪಡುತ್ತಿದ್ದೇನೆ. ದೇವರಿಗಾಗಿ ಬದುಕುತ್ತಿದ್ದೇನೆ. ದೈವ ಶರಣಾಗತಿಯಿಂದಲೇ ಶಾಂತಿ ಸಿಗುತ್ತದೆ' ಎಂದಿರುವ ಮನಿಷಾ ಮನಸ್ಸು ಈಗ ಅಧ್ಯಾತ್ಮದತ್ತ ವಾಲಿದೆಯಂತೆ. ಆದಷ್ಟು ಬೇಗ ಅವರು ತಮ್ಮ ಆತ್ಮಕಥೆಯನ್ನು ಸಿದ್ಧಪಡಿಸುತ್ತಾರಂತೆ. ಅದರಲ್ಲಿ ಅವರ ಬದುಕಿನ ಹೋರಾಟದ ಕ್ಷಣಗಳು ದಾಖಲಾಗಲಿವೆ.