ಕನಕಪುರ ರಸ್ತೆ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನವರಾತ್ರಿ ಅದ್ಧೂರಿಯಿಂದ ನಡೆಯಿತು.
ಒಂಬತ್ತೂ ದಿನ ಹೋಮ, ಧ್ಯಾನ, ಸತ್ಸಂಗದಲ್ಲಿ ಭಾರತೀಯ ಭಕ್ತರ ಜತೆ 65 ದೇಶಗಳ 4 ಸಾವಿರಕ್ಕೂ ಹೆಚ್ಚು ವಿದೇಶಿ ಭಕ್ತರೂ ಪಾಲ್ಗೊಂಡಿದ್ದರು.
ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಸುದರ್ಶನ ಹೋಮದ ಸಂದರ್ಭದಲ್ಲಿ ವೀಣೆ ಮತ್ತು ಪಾಶ್ಚಾತ್ಯ ವಾದ್ಯ `ಹಾರ್ಪ್~ ನುಡಿಸಿದ್ದು ವಿಶೇಷವಾಗಿತ್ತು.