ರಾಳೆಗಣಸಿದ್ಧಿ (ಮಹಾರಾಷ್ಟ್ರ), (ಐಎಎನ್ಎಸ್): ಕೇಂದ್ರ ಸರ್ಕಾರವು ಜನ ಲೋಕಪಾಲ ಮಸೂದೆಯನ್ನು ಇಲ್ಲಿಯವರೆಗೆ ಸಂಸತ್ತಿನಲ್ಲಿ ಅಂಗೀಕಾರಗೊಳಿಸದೆ ತಮಗೂ, ಸಾರ್ವಜನಿಕರಿಗೂ ದ್ರೋಹ ಬಗೆದಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ದೂರಿದರು.
ಈ ಹಿನ್ನೆಲೆಯಲ್ಲಿ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿ ಮಂಗಳವಾರದಿಂದ ಸ್ವಗ್ರಾಮದಲ್ಲಿಯೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದರು.