`ಆರೋಗ್ಯವೇ ಭಾಗ್ಯ~ ಎಂಬುದು ಚಿರಪರಿಚಿತವಾದ ಮಾತು. ಆದರೆ ಅನಾರೋಗ್ಯವೇ `ಭಾಗ್ಯ~ ವಾಗಬಹುದು. ಭ್ರಷ್ಟಾಚಾರ ಕಾರಣದಿಂದ ಜೈಲು ಸೇರುವವರ ಪಾಲಿಗೆ!
ತನ್ಮೂಲಕ ಅವರು ತಾತ್ಕಾಲಿಕವಾಗಿ ಜೈಲಿನಿಂದ ಪಾರಾಗಿ, ಆಸ್ಪತ್ರೆ ವಾಸಕ್ಕೆ ಗುರಿಯಾಗಬಹುದು. ಅದು ಎಷ್ಟೋ ಪಾಲು ಮೇಲು ಅಲ್ಲವೆ? ಅಂಥವರು ಒಳಗೊಳಗೇ ಹಾಡಿಕೊಳ್ಳಬಹುದು, `ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ~ ಎಂದು! (ಬಹು ಸಂದರ್ಭಗಳಲ್ಲಿ ಇದು ಕೃತಕ `ಭಾಗ್ಯ~).