ಬೆಂಗಳೂರು: ಸೇವೆಯ ಕಾಯಮಾತಿ ಹಾಗೂ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನೌಕರರ ಸಂಘ (ಅಕೌಂಟೆಂಟ್ಸ್ ಅಂಡ್ ಡಾಟಾ ಎಂಟ್ರಿ ಆಪರೇಟರ್ಸ್) ಇದೇ ಮಾರ್ಚ್ 1ರಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳಲ್ಲಿ ಕಂಪ್ಯೂಟರೀಕರಣ ಕೆಲಸ ಸ್ಥಗಿತಗೊಳಿಸಲು ಮುಂದಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ರಂಗಾಚಾರಿ ಬಿ. ನಾರೋಜ್ ಅವರು, ಈ ಸಾಲಿನ ಬಜೆಟ್ನಲ್ಲಿ ತಮ್ಮ ಈ ಬೇಡಿಕೆಗಳ ಈಡೇರಿಕೆ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲದಿರುವುದರಿಂದ ಹೋರಾಟದ ಹಾದಿ ಅನಿವಾರ್ಯ ಎಂದು ತಿಳಿಸಿದ್ದಾರೆ.