ಈಗ ಜಾರಿಯಲ್ಲಿರುವ ಬ್ರಿಟಿಷ್ ಕಾಲದ ಕಾನೂನುಗಳು ಶಕ್ತಿಹೀನವಾಗಿವೆ. ಆದ್ದರಿಂದ ದೇಶದ್ರೋಹಿಗಳಿಗೆ ಅತಿಶೀಘ್ರವೇ ಶಿಕ್ಷೆಕೊಡುವಂತಹ ಕಠಿಣ ಕಾನೂನಿನ ಅವಶ್ಯಕತೆ ಇದೆ. ರಾಜ್ಯದಲ್ಲಿರುವ ವಿಧಾನ ಸಭೆಗಳು ಕೂಡ ಈ ವೈಫಲ್ಯತೆಗೆ ಕಾರಣವಾಗಿವೆ. ವಿಧಾನ ಸಭೆಯಲ್ಲಿ ಬಹುಮತವಿರುವ ಆಡಳಿತ ಪಕ್ಷ ತಮಗೆ ಬೇಕಾದ ಹಾಗೆ ಒಂದು ಠರಾವನ್ನು ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು ರಾಷ್ಟ್ರ ದ್ರೋಹಿಗಳ ಬೆಂಬಲಕ್ಕೆ ಸಾಕ್ಷಿ. ತಮಿಳು ನಾಡು ಮತ್ತು ಜಮ್ಮು ಕಾಶ್ಮೀರಿನಲ್ಲಿ ಈ ಬೆಳವಣಿಗೆ ನಡೆದಿರುವುದು ರಾಷ್ಟ್ರದ್ರೋಹಿಗಳ ಕೆಲಸಗಳಿಗೆ ಕುಮ್ಮಕ್ಕು ಕೊಟ್ಟಂತಾಗಿದೆ.