ಬೆಳಗಾವಿ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಆಶ್ರಯ ನಗರದಲ್ಲಿ ಪ್ರತ್ಯಕ್ಷವಾದ ನಾಗರಹಾವನ್ನು ಉರಗ ತಜ್ಞ ಶ್ರೀಕಾಂತ ನೇವಗಿ ಬುಧವಾರ ಹಿಡಿದು, ನಂತರ ಅರಣ್ಯ ಪ್ರದೇಶದಲ್ಲಿ ಹರಿಬಿಟ್ಟರು.
ಬೆನಕನಹಳ್ಳಿ ನಿವಾಸಿ ಹಾಗೂ ದಿನ ಪತ್ರಿಕೆಗಳ ವಿತರಕರಾಗಿರುವ ಶ್ರೀಕಾಂತ ಮೊದಲಿನಿಂದಲೂ ಹಾವು ಹಿಡಿಯುವುದರಲ್ಲಿ ನಿಪುಣರು. ಈವರೆಗೆ 5500 ಸಾವಿರ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿರುವುದಾಗಿ ಅವರು ಹೇಳಿದ್ದಾರೆ.