ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನರು ಬೇರೆ ಬೇರೆ ಅಲ್ಲ. ಎಲ್ಲರೂ ಒಂದೇ ಎನ್ನುವ ಕುರಿತು ಎಂಇಎಸ್ ಶಾಸಕರು ಹಾಗೂ ಮುಖಂಡರಿಗೆ ತಿಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುವ ಎಂಇಎಸ್ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಈ.ನರಸಿಂಹ ಹಾಗೂ ಪದಾಧಿಕಾರಿಗಳಾದ ಶ್ರೀಶೈಲಗೌಡ, ರಮೇಶಬಾಬು ಯಾಳಗಿ, ಪಿ.ಪರಮೇಶ, ಎಚ್.ಟಿ. ಪ್ರಕಾಶಬಾಬು, ಮೂಕಪ್ಪ ಕಟ್ಟಿಮನಿ, ಮಂಜುನಾಥ ಕಮತರ, ನಾಗರಾಜ ಕೊಳ್ಳಿ, ಎಂ.ಎಂ.ಹಿರೇಮಠ, ಮಲ್ಲೇಶಪ್ಪ ಬ್ಯಾಗವಾಟ, ಮಲ್ಲಿಕಾರ್ಜುನ ಮಾಚನೂರು, ಜಾವೀದ್ ಖಾನ್, ಗಯಾಸ್, ಶಿವಪ್ಪ ಭೂಸಾರೆ, ಖಲೀಲ್ ಖುರೇಷಿ, ಜಯರಾಜ ಕಲಂಗೇರಾ, ಕಲ್ಮಠ ಮೊದಲಾದವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.