ಫರೂಕಾಬಾದ್ (ಪಿಟಿಐ): ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ವಿರುದ್ಧದ ಹಣಕಾಸು ಅವ್ಯವಹಾರದ ಆರೋಪಗಳಿಗೆ ಸಂಬಂಧಿಸಿದಂತೆ, ಅವರ ಸ್ವಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದ ಭ್ರಷ್ಟಾಚಾರ ವಿರುದ್ಧದ ಭಾರತ ಸಂಘಟನೆ (ಐಎಸಿ) ಕಾರ್ಯಕರ್ತರು ಮತ್ತು ಪತ್ರಕರ್ತರೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ದಿಗ್ಬಂಧನ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ದೆಹಲಿ ಮೂಲದ ಪತ್ರಕರ್ತ ಅಭಿನಂದನ್ ಮಿಶ್ರಾ ಮತ್ತು ಐಎಸಿ ಸಂಘಟನೆಯ ಸ್ಥಳೀಯ ಸಂಚಾಲಕ ಲಕ್ಷ್ಮಣ್ ಸಿಂಗ್ ನೇತೃತ್ವದ ಕಾರ್ಯಕರ್ತರ ತಂಡ ದಿಗ್ಬಂಧನಕ್ಕೊಳಗಾದವರು.