ಬೆಂಗಳೂರು: ಮಂಗಳೂರು, ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಕಮಿಷನರ್ಗಳು ಸೇರಿದಂತೆ ರಾಜ್ಯ ಸರ್ಕಾರ ಗುರುವಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕೆ.ಎಸ್.ಆರ್. ಚರಣರೆಡ್ಡಿ ಅವರನ್ನು ಗೃಹ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿದೆ. ಜತೆಗೆ ಹೆಚ್ಚುವರಿಯಾಗಿ ತರಬೇತಿ ವಿಭಾಗದ ಐಜಿಪಿ ಹುದ್ದೆ ನಿಭಾಯಿಸುವಂತೆ ಸೂಚಿಸಲಾಗಿದೆ.
ಆರ್. ಹಿತೇಂದ್ರ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬಿ.ಎ. ಪದ್ಮನಯನ ಅವರನ್ನು ಬಂಧಿಖಾನೆಯ ಡಿಐಜಿ ಹುದ್ದೆಗೆ, ಮನೀಷ್ ಖರ್ಬಿಕರ್ ಅವರನ್ನು ಕೆಎಸ್ಆರ್ಪಿ ಡಿಐಜಿ ಹುದ್ದೆಗೆ ಹಾಗೂ ರವೀಂದ್ರ ಪ್ರಸಾದ್ ಅವರನ್ನು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.