ನವದೆಹಲಿ: ಪ್ರಸ್ತಾವಿತ ತೆಲಂಗಾಣ ರಾಜ್ಯದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭದಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸಲಿದೆ. ರಾಜ್ಯ ಲೋಕಸೇವಾ ಆಯೋಗವನ್ನು ಆಂಧ್ರದಲ್ಲೇ ಉಳಿಸಲು ಕೇಂದ್ರ ನಿರ್ಧರಿಸಿದೆ. ಆದರೆ, ಹೈಕೋರ್ಟ್ ವಿಭಜನೆಗೆ ವಿರೋಧ ವ್ಯಕ್ತಪಡಿಸಿದೆ.
ಪ್ರತ್ಯೇಕ ಹೈಕೋರ್ಟ್ ರಚನೆ ಆಗುವವರೆಗೆ ಎರಡೂ ರಾಜ್ಯಗಳಿಗೆ ಒಂದೇ ಹೈಕೋರ್ಟ್. ಜನಸಂಖ್ಯೆ ಆಧಾರದ ಮೇಲೆ ಖರ್ಚುವೆಚ್ಚಗಳು ಹಂಚಿಕೆಯಾಗಲಿದೆ ಎಂದು ದಾಖಲೆಗಳು ತಿಳಿಸಿವೆ.