ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ತಡರಾತ್ರಿಗೂ ಮುಂದುವರಿಯಿತು. ಮತ ಎಣಿಕೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಬುಧವಾರ 300 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಗುರುವಾರ ಮತ್ತೆ ಹೆಚ್ಚುವರಿಯಾಗಿ 200 ಸಿಬ್ಬಂದಿಯ ನೆರವು ಪಡೆಯುವ ಮೂಲಕ ಎಣಿಕೆಯನ್ನು ಚುರುಕುಗೊಳಿಸಲಾಯಿತು. ಈ ಕ್ಷೇತ್ರಗಳ 15 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಸೋಮವಾರ ಆರಂಭವಾಗಿತ್ತು. ಗೊಂದಲ ಉಂಟಾಗಿದ್ದರಿಂದ ಮರುಎಣಿಕೆ ಮಾಡಲಾಯಿತು. ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಮತ ಎಣಿಕೆ ನಡೆದಿತ್ತು.