ಹೈದರಾಬಾದ್ (ಪಿಟಿಐ): ಕೃಷ್ಣಾ ಹೆಚ್ಚುವರಿ ನೀರು ಹಂಚಿಕೆ ಕುರಿತು ಗುರುವಾರ ಪ್ರಕಟಿಸಲಾದ ತೀರ್ಪಿನಲ್ಲಿ ರಾಜ್ಯಕ್ಕೆ ಅನುಕೂಲವಾಗುವಂತಹ ಕೆಲವು ಅಂಶಗಳೂ ಇವೆ ಎಂದಿರುವ ಕಂದಾಯ ಸಚಿವ ಎನ್.ರಘುವರ ರೆಡ್ಡಿ, ತೀರ್ಪನ್ನು ಪೂರ್ಣ ಅಧ್ಯಯನ ಮಾಡಿದ ನಂತರ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಈ ತೀರ್ಪಿನಲ್ಲಿ ರಾಜ್ಯಕ್ಕೆ ಧನಾತ್ಮಕವಾಗುವಂತಹ ಕೆಲವು ಅಂಶಗಳಿದ್ದರೆ ಇನ್ನು ಕೆಲವು ಋಣಾತ್ಮಕ ಅಂಶಗಳಿವೆ. ಸರ್ಕಾರ ತೀರ್ಪನ್ನು ಕೂಲಕಂಷವಾಗಿ ಅಧ್ಯಯನ ಮಾಡುತ್ತಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.