ಮಂಗಳೂರು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕುರಿತ ಬಹು ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು ಭಾಷೆಯ ಅಧ್ಯಯನಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಿ, ಅಗತ್ಯ ಹುದ್ದೆಗಳ ನಿಯೋಜನೆಗೆ ಕೇಂದ್ರವು ಅನುಮತಿ ನೀಡಿದೆ.
ಈ ಸಂಬಂಧದ ಆದೇಶವು ಸೋಮವಾರ ನಮ್ಮ ಕೈಸೇರಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ~ಮುಖ್ಯಮಂತ್ರಿ~ ಚಂದ್ರು ಮಂಗಳವಾರ ಇಲ್ಲಿ ನಡೆದ ಪತ್ರ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.