ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಹೆಸರಿಗೆ ಬರವೇ?

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

`ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು~ ಎಂದು ಹೇಳಿದ ಕವಿ ಯಾರು ಎಂಬುದು  ಬಹುಶಃ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಗಳಿಗೆ ಮರೆತು ಹೋಗಿದೆಯೇ?

ಈ ಸಂದೇಹಕ್ಕೆ ಕಾರಣ, ಏನೆಂದರೆ ವಿಶ್ವವಿದ್ಯಾಲಯ ಮತ್ತು ಪ್ರತಿಷ್ಠಾನಗಳ ಸಂಯುಕ್ತ ಪ್ರಯತ್ನದ ಫಲವಾಗಿ ಕುಪ್ಪಳಿಯ ಕುವೆಂಪು ಸಹ್ಯಾದ್ರಿ ದೇಸಿ ವಸ್ತು ಸಂಗ್ರಹಾಲಯದ ಆವರಣದಲ್ಲಿ `ಹೆರಿಟೇಜ್ ವಿಲೇಜ್~ ಎಂಬ `ಇಂಗ್ಲಿಷ್ ಹಳ್ಳಿ~ಯ ನಿರ್ಮಾಣ ಆಗಲಿದೆ ಎಂಬುದು ಮತ್ತು ಅದಕ್ಕೆ ರಾಜ್ಯ ಸರ್ಕಾರ ಐದು ಕೋಟಿ ರೂ ದೇಣಿಗೆಯನ್ನೂ ನೀಡಲು ಸಿದ್ಧವಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

`ಹೆರಿಟೇಜ್ ವಿಲೇಜ್~ ಎಂದರೆ ಇಂಗ್ಲಿಷ್ ಹಳ್ಳಿಯೇ? ಅದು ಅಪ್ಪಟ ಚೆಲುವ ಕನ್ನಡ ತಾಣವಾಗಬೇಕಲ್ಲವೇ? ಹೌದೆಂದರೆ ಅದಕ್ಕೊಂದು ಕನ್ನಡದ ಹೆಸರನ್ನು ಇಡಲಾಗದೆ ಇಂಗ್ಲಿಷ್ ಹೆಸರಿಗೆ ಜೋತು ಬೀಳುವ ದುಃಸ್ಥಿತಿ ಸಂಬಂಧಪಟ್ಟವರಿಗೆ ಏಕೆ ಬಂತು?

`ಕನ್ನಡಕ್ಕಾಗಿ ಹಾಗೆ ಮಾಡಬೇಕು..ಹೀಗೆ ಮಾಡಬೇಕು; ಅಷ್ಟು ಕಡಿಯಬೇಕು, ಇಷ್ಟು ಕೊಚ್ಚಬೇಕು~ ಎಂದೆಲ್ಲ ಭಾಷಣವನ್ನು ಮಾಡುವವರು ಕುಪ್ಪಳಿ ಪರಿಸರದಲ್ಲಿ ಒಡಮೂಡುವ ದೇಸಿ ಸಂಸ್ಕೃತಿಯ ತಾಣದ ಹೆಸರು ಕನ್ನಡದ್ದೇ ಆಗಿರಬೇಕು ಎಂದು ಯಾಕೆ ಯೋಚಿಸುವುದಿಲ್ಲ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT