ಪೀಣ್ಯದಾಸರಹಳ್ಳಿ: ಮಕ್ಕಳು ಮಾತೃಭಾಷೆಯನ್ನು ಕಲಿತಾಗ ಮಾತ್ರ ಅವರ ಆಲೋಚನೆ, ವಿಚಾರಗಳಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.
ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಸಕ ಎಸ್.ಮುನಿರಾಜು ಮಾತನಾಡಿ ಕನ್ನಡ ನಾಡಿಗೆ ಯಾವ ಭಾಷೆಯವರು ಬಂದರೂ ಮೊದಲು ಅವರಿಗೆ ಕನ್ನಡ ಕಲಿಸಬೇಕು ನಮ್ಮ ಭಾಷೆಯ ವ್ಯಾಮೋಹ ಹೆಚ್ಚಿನ ರೀತಿಯಲ್ಲಿ ಬೆಳೆಯುವಂತೆ ಮಾಡಬೇಕು ಎಂದರು.
ಚಲನಚಿತ್ರ ನಟ ರಮೇಶ್ ಭಟ್, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ. ತಿಮ್ಮೇಶ್, ಭೈರಮಂಗಲ ರಾಮೇಗೌಡ, ದಾಸರಹಳ್ಳಿ ಕಸಾಪ ಅಧ್ಯಕ್ಷ ವೈ.ಬಿ. ಎಚ್. ಜಯದೇವ್ ಹಾಜರಿದ್ದರು.