ವಿಜಯಿ ತಂಡ ವಿರಾಮದ ವೇಳೆಗೆ 18-9ರಲ್ಲಿ ಮುನ್ನಡೆಯಲ್ಲಿತ್ತು. ವಿರಾಮದ ನಂತರ 18 ಪಾಯಿಂಟ್ಸ್ ಕಲೆ ಹಾಕಿ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವಿಜಯ ಬ್ಯಾಂಕ್ 34-26 (ವಿರಾಮದ ವೇಳೆ 29-9) ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಮೇಲೂ, ಎಸ್ಬಿಎಂ 33-12 (ವಿರಾಮದ ವೇಳೆ 19-8) ಆರ್ಡಬ್ಲ್ಯುಎಫ್ ವಿರುದ್ಧವೂ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದವು.
ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ದಾಳಿಗಾರ: ಪ್ರಶಾಂತ್ (ವಿಜಯ ಬ್ಯಾಂಕ್), ಹಿಡಿತಗಾರ: ಜೀವಾ ಕುಮಾರ್ (ಎಸ್ಬಿಎಂ) ಹಾಗೂ ಸರ್ವೋತ್ತಮ ಆಟಗಾರ: ಸುರೇಶ್ ಕುಮಾರ್ (ಎಸ್ಬಿಎಂ).
ಟ್ರೋಫಿ ಪ್ರಧಾನ: ಚಾಂಪಿಯನ್ ಎಸ್ಬಿಎಂ ತಂಡಕ್ಕೆ ವಿಜಯ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಉಪೇಂದ್ರ ಕಾಮತ್ ಪ್ರಶಸ್ತಿ ಪ್ರದಾನ ಮಾಡಿದರು. ವಿಜೇತ ತಂಡ 50,000 ಹಾಗೂ ರನ್ನರ್ ಅಪ್ ವಿಜಯ ಬ್ಯಾಂಕ್ 30,000 ರೂ. ಬಹುಮಾನ ಜೇಬಿಗಿಳಿಸಿತು. ಈ ವೇಳೆ ಬೆಂಗಳೂರು ಜಿಲ್ಲಾ ಕಬಡ್ಡಿ ಸಂಸ್ಥೆ ಜಂಟಿ ಕಾರ್ಯದರ್ಶಿ ಬಾಲಾಜಿ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.