ಮಂಗಳೂರು: ಕರ್ಣಾಟಕ ಬ್ಯಾಂಕ್ 2012-13ನೇ ಸಾಲಿಗೆ ತನ್ನ ಷೇರುದಾರರಿಗೆ ಶೇ 40ರಷ್ಟು ಲಾಭಾಂಶ ಘೋಷಿಸಿದ್ದು, ಈ ಹಣಕಾಸು ವರ್ಷದೊಳಗೆ ರೂ78 ಸಾವಿರ ಕೋಟಿ ವಹಿವಾಟು ನಡೆಸುವ ಗುರಿಯನ್ನು ಇಟ್ಟುಕೊಂಡಿದೆ.
ಶನಿವಾರ ಇಲ್ಲಿ ನಡೆದ ಬ್ಯಾಂಕ್ನ 89ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶೇ 40ರಷ್ಟು ಲಾಭಾಂಶ ಘೋಷಿಸುವ ಒಂದು ಸಾಲಿನ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.
ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್ ಮಾತನಾಡಿ, ಈ ವರ್ಷ ಒಟ್ಟು ವ್ಯವಹಾರದಲ್ಲಿ ಶೇ 28ರಷ್ಟು ಪ್ರಗತಿ ಸಾಧಿಸುವ ಗುರಿ ಇದೆ. 50 ಹೊಸ ಶಾಖೆಗಳು ಮತ್ತು 100 ಹೊಸ ಎಟಿಎಂಗಳನ್ನು ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ಬ್ಯಾಂಕ್ನ ನಿರ್ದೇಶಕರು, ಮಹಾಪ್ರಬಂಧಕರು, ಹಿರಿಯ ಅಧಿಕಾರಿಗಳು, ಸಾವಿರಕ್ಕೂ ಹೆಚ್ಚಿನ ಷೇರುದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.