ಈ ಬ್ರಿಡ್ಜ್ ಮೇಲೆ ಆಟೊ, ಬೈಕ್ಗಳು ಓಡಾಡುತ್ತದೆ. ಆದರೆ ಇಲ್ಲಿ ಒಂದು ಆಟೊ ಬಂದರೆ ಆಟೊ ಹೋಗುವತನಕ ಜನರು ಪಕ್ಕದಲ್ಲಿ ನಿಂತಿರಬೇಕಾಗುತ್ತದೆ. ಈ ಬ್ರಿಡ್ಜ್ ಸುತ್ತ-ಮುತ್ತ ವಾಸಿಸುತ್ತಿರುವ ಜನರು ಮೊದಲು ಕಸವನ್ನು ಆ ಬ್ರಿಡ್ಜ್ ಕೆಳಗಿರುವ ಮೋರಿಗೆ ಹಾಕುತ್ತಿದ್ದರು. ಆದರೆ ಬಿಬಿಎಂಪಿಯವರು ಆ ಬ್ರಿಡ್ಜ್ಗೆ ಕಬ್ಬಿಣದ ಜಾಲರಿ ಹಾಕಿರುವುದರಿಂದ ಜನರು ಆ ಬ್ರಿಡ್ಜ್ ಮೇಲೆಯೆ ಕಸ ಹಾಕುತ್ತಾರೆ. ಆ ಕಸದಲ್ಲಿರುವ ಕಾಯಿ ಸಿಪ್ಪೆ ತಿನ್ನಲು ಹಸುಗಳು ಬಂದು ನಿಂತಿರುತ್ತದೆ. ಇದರಿಂದ ಅಲ್ಲಿ ಓಡಾಡುವ ಜನರಿಗೆ ತುಂಬಾ ತೊಂದರೆಯಾಗಿದೆ. ಅಲ್ಲಿ ಓಡಾಡುವ ಜನರು ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದಯವಿಟ್ಟು ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಬೇಕು ಹಾಗೂ ಇಲ್ಲಿ ಕಸ ಹಾಕುವುದನ್ನು ತಪ್ಪಿಸಬೇಕು.