ಶ್ರೀನಗರ (ಪಿಟಿಐ): ವಲಸೆ ಹೋದ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ರೂ 1,600 ಕೋಟಿ ಮೊತ್ತದ ಹಣಕಾಸು ಪ್ಯಾಕೇಜ್ನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಘೋಷಿಸಿದೆ.
`ಕಾಶ್ಮೀರದಿಂದ ವಲಸೆ ಹೋದ ಪಂಡಿತರು ಹಿಂತಿರುಗಿ ಬರುವಂತೆ ಪ್ರೋತ್ಸಾಹಿಸಲು ಹಾಗೂ ಅವರ ಪುನರ್ವಸತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂ 1,618 ಕೋಟಿ ಪ್ಯಾಕೇಜ್ ಘೋಷಿಸಿದೆ~ ಎಂದು ಕಂದಾಯ ಖಾತೆ ರಾಜ್ಯ ಸಚಿವ ನಾಸಿರ್ ಅಸ್ಲಾಂ ವಾನಿ ತಿಳಿಸಿದರು.ವಲಸೆ ಹೋದ ಪಂಡಿತರಿಗೆಂದೇ 3000ದಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆಯಲ್ಲದೆ, ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಇದೇ ವೇಳೆ 2,148 ಜನರಿಗೆ ನೇಮಕಾತಿ ಆದೇಶಗಳನ್ನು ಕಳುಹಿಸಲಾಗಿದ್ದು ಇವರಲ್ಲಿ 1,441 ಮಂದಿ ಈಗಾಗಲೇ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದಾರೆ.