ಶಿರಹಟ್ಟಿ: ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗಾಗಿ ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಭದ್ರತೆಯನ್ನು ರೂಪಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎನ್. ರಾಟಿ ಹೇಳಿದರು.
ಪಟ್ಟಣದ ಡಾನ್ಬಾಸ್ಕೋ ಸಂಸ್ಥೆಯಡಿ ಈಚೆಗೆ ಜರುಗಿದ ಮಹಿಳೆಯರ ಸಶಕ್ತತೆಗಾಗಿ ಗೃಹ ಕೈಗಾರಿಕೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿನಾಕಾರಣ ದುಂದುವೆಚ್ಚ ಸಲ್ಲದು. ಅದೇ ಹಣವನ್ನು ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಉಪಯೋಗಿಸಬೇಕು ಎಂದು ಹೇಳಿದರು. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪಾಲಕರು ಶ್ರಮಿಸಬೇಕು.