ಗಜೇಂದ್ರಗಡ: `ಕುರಿಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದ್ದು ಕುರಿ ಗಾರರನ್ನು ಚಿಂತೆಗೀಡು ಮಾಡಿದೆ.
ಕುರಿಗಳನ್ನು ಮೇಯಿಸಲು ಬಿಟ್ಟಿದ್ದಾಗ ಯಾವುದೇ ರೋಗ ಇರುವುದಿಲ್ಲ. ಆದರೆ, ಮೇಯ್ದು ವಾಪಸ್ ಬಂದು ರಾತ್ರಿ ದೊಡ್ಡಿ ಸೇರಿಕೊಳ್ಳುವ ಕುರಿಗಳ ಕಾಲುಗಳಲ್ಲಿ ಬೆಳಿಗ್ಗೆ ಗಾಯ ಕಂಡುಬರುತ್ತದೆ.
ಆ ಗಾಯದಲ್ಲಿ ಹುಳುಗಳು ಇರುತ್ತವೆ. ಹುಳುಗಳ ಕಾಟದಿಂದ ಸುಸ್ತಾಗುವ ಅವುಗಳಿಗೆ ನೋವಿನಿಂದ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಗಂಟಲು ಮತ್ತು ನಾಲಿಗೆ ಊದಿಕೊಳ್ಳುತ್ತದೆ. ಶ್ವಾಸಕೋಶ ತೊಂದರೆ, ಭೇದಿ ಕಾಣಿಸಿಕೊಳ್ಳುತ್ತಿದೆ ಎಂದು ಕುರಿಗಾಹಿಗಳು ತಿಳಿಸಿದರು.
`ಮಳೆಗಾಲದ ದಿನಗಳಲ್ಲಿ ಕುರಿಗಳಿಗೆ ಕಾಲುಬೇನೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಕುರಿಗಳ ಕಾಲು ಗಳಲ್ಲಿನ ಗಂಭೀರ ಗಾಯಗಳಲ್ಲಿ ಹುಳು ಗಳು ಉತ್ಪತ್ತಿಯಾಗುತ್ತಿ ರುವುದು ಅಚ್ಚರಿ ಮೂಡಿಸಿದೆ.
ಸದ್ಯ ಕಾಲು ಬೇನೆ, ಗಂಟಲು ಬೇನೆ, ಜ್ವರದಿಂದ ಬಳಲುತ್ತಿರುವ ಕುರಿ, ಮೇಕೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಈ ಕಾಯಿಲೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ರೋಗ ವಾಸಿಯಾಗದಿದ್ದರೆ ಹಿರಿಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ' ಎಂದು ರಾಜೂರು ಪಶು ವೈದ್ಯಕೀಯ ಪರಿವೀಕ್ಷಕ ಯು.ಆರ್.ಚನ್ನಮ್ಮನವರ ತಿಳಿಸಿದರು.
`ಕುರಿಗಾರರು ಭಯ ಪಡುವ ಅಗತ್ಯವಿಲ್ಲ. ಮಳೆಗಾಲದ ದಿನಗಳಲ್ಲಿ ಬರಬಹುದಾದ ಕಾಯಿಲೆಗಳಲ್ಲಿ ಇದು ಒಂದಾಗಿರಬಹುದು. ಈ ಕಾಯಿಲೆ ನಿವಾರಣೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಆಯಾ ಪಶು ಚಿಕಿತ್ಸಾ ಕೇಂದ್ರಗಳಿಗೆ ಸೂಚಿಸಲಾಗಿದೆ' ಎನ್ನುತ್ತಾರೆ ತಾಲ್ಲೂಕು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ ದೊಡ್ಡಮನಿ.