ಗುರುವಾರ ರಾತ್ರಿ 8.30ಕ್ಕೆ ಸೋನಿಯಲ್ಲಿ ಪ್ರಸಾರವಾಗುವ `ಕೌನ್ ಬನೇಗಾ ಕರೋಡ್ಪತಿ~ಯಲ್ಲಿ ಅಮಿತಾಭ್ ಬಚ್ಚನ್ ಎದುರು ಹಾಟ್ಸೀಟ್ನಲ್ಲಿ ಕುಳಿತುಕೊಳ್ಳುವ ಸ್ಪರ್ಧಿ ಜನಪ್ರಿಯ ನಟ ರಣಬೀರ್ ಕಪೂರ್.
ಇಲ್ಲಿ ಗೆಲ್ಲುವ ಬಹುಮಾನದ ಹಣವನ್ನು ಅವರು ಪೆಪ್ಸಿಕೊ ಇಂಡಿಯಾ ಕಂಪೆನಿಯ ಜಲ ಸಂರಕ್ಷಣೆ ಯೋಜನೆಗೆ ಕೊಡುಗೆಯಾಗಿ ನೀಡುತ್ತಿದ್ದಾರೆ.
ರಣ್ಬೀರ್ ಬರೀ ನಟ ಮಾತ್ರವಲ್ಲ, ಭೂ ಗ್ರಹದ ಬಗ್ಗೆ ಸಾಕಷ್ಟು ಕಾಳಜಿಯನ್ನೂ ಹೊಂದಿದ್ದಾರೆ. ಈ ಎಪಿಸೋಡ್ನಲ್ಲಿ ಅಮೂಲ್ಯ ನೈಸರ್ಗಿಕ ಸಂಪನ್ಮೂಲವಾದ ನೀರಿನ ರಕ್ಷಣೆ ಬಗ್ಗೆ ಮಾತನಾಡಿದ್ದಾರೆ. ಅವರು ಪೆಪ್ಸಿಯ ಬ್ರಾಂಡ್ ರಾಯಭಾರಿಯೂ ಹೌದು.