ಬ್ಯಾಂಕ್ಗಳನ್ನು ವಿಲೀನಗೊಳಿಸುವುದನ್ನು ನಿಲ್ಲಿಸಬೇಕು. ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ರಕ್ಷಣೆ ನೀಡುವುದನ್ನು ನಿಲ್ಲಿಸಬೇಕು. ಖಾಸಗಿ ಕಂಪನಿಗಳಿಗೆ ಹೊಸ ಪರವಾನಗಿ ನೀಡುವ ನಿರ್ಧಾರ ಕೂಡಲೇ ಹಿಂಪಡೆಯಬೇಕು. ಜತೆಗೆ, ದೇಶದ ಬ್ಯಾಂಕಿಂಗ್ ಕ್ಷೇತ್ರದ ರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಸಿದ್ಧ ಇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ನ ರಾಜಪ್ಪ, ಐಎನ್ಜಿ ವೈಶ್ಯ ಬ್ಯಾಂಕಿನ ಗೀರೀಶ್, ಕಾರ್ಪೊರೇಷನ್ ಬ್ಯಾಂಕಿನ ವೀರೇಶ್, ಇಂಡಿಯನ್ ಬ್ಯಾಂಕಿನ ಪ್ರಶಾಂತ್, ಜೆಸಿಆರ್ ಬಡಾವಣೆಯ ಎಸ್ಬಿಎಂ ಬ್ಯಾಂಕಿನ ಸದಾಶಿವಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೆನರಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರತು ಪಡಿಸಿ ಉಳಿದಂತೆ ಎಲ್ಲ ಬ್ಯಾಂಕಗಳನ್ನು ಮುಚ್ಚಲಾಗಿತ್ತು.