28 ವರ್ಷಗಳ ನಂತರ ದೇಶಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಧೋನಿ ನೇತೃತ್ವದ ತಂಡದಲ್ಲಿನ ಒಡಕು ಈಗ ಬಹಿರಂಗವಾಗಿದೆ.
ಅಪಜಯದ ಗಾಯದ ಮೇಲೆ ಭಿನ್ನಾಭಿಪ್ರಾಯದ ಹುಳಿ ಹಿಂಡಿದಂತಾಗಿದೆ. ಗೆದ್ದಾಗ ಸಂಭ್ರಮಿಸುವ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದಲ್ಲಿನ ಈ ಒಡಕಿನಿಂದ ನಿರಾಸೆಗೊಂಡಿದ್ದಾರೆ.
ಹಣದ ಮದದಿಂದ ಕೊಬ್ಬಿರುವ ಆಟಗಾರರು ಪಾಠ ಕಲಿಯುವುದು ಯಾವಾಗ?