ಆದರೆ, ಕಾವೇರಿ ಹೋರಾಟ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಈ ಮಾರ್ಗಗಳಲ್ಲಿ ಬಸ್, ಲಾರಿ ಸೇರಿದಂತೆ ಇತರೇ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಾರ್ಗವಾಗಿ ನೆರೆಯ ರಾಜ್ಯಕ್ಕೆ ಸಂಪರ್ಕ ಬೆಸೆಯುವ ಮೈಸೂರು- ಊಟಿ ರಸ್ತೆಯಲ್ಲೂ ಸಂಚಾರ ನಿರ್ಬಂಧಿಸಲಾಗಿತ್ತು.
ಪ್ರಸ್ತುತ ತಮಿಳುನಾಡಿಗೆ ಕಾವೇರಿ ನೀರು ಹರಿಯುವುದು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿಯೂ ಹೋರಾಟದ ಕಾವು ಕಡಿಮೆಯಾಗಿದೆ. ಹೀಗಾಗಿ, ವಾಹನಗಳ ಸಂಚಾರ ಪುನರಾರಂಭಗೊಂಡಿದೆ. ತಮಿಳುನಾಡಿನಿಂದಲೂ ಬಸ್ಗಳು ಕರ್ನಾಟಕಕ್ಕೆ ಪ್ರವೇಶಿಸುತ್ತಿವೆ.
`ನಿತ್ಯ ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರ ವಿಭಾಗದಿಂದ ತಮಿಳುನಾಡಿಗೆ 20 ಬಸ್ಗಳು ಸಂಚರಿಸುತ್ತವೆ.