ಬೆಂಗಳೂರು: ಗಾಂಧೀಜಿಯ ತತ್ವ- ಸಿದ್ಧಾಂತಗಳು ಇಂದಿಗೂ ಪ್ರಸ್ತುತ. ಇದಕ್ಕೆ ಇಂದಿಗೂ ಗಾಂಧಿಯ ಮೇಲೆ ಜನರು ಇಟ್ಟುಕೊಂಡಿರುವ ನಂಬಿಕೆಯೇ ಸಾಕ್ಷಿ ಎಂದು ಮಹಾತ್ಮ ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಹೇಳಿದರು.
ಸಪ್ತಸಾಗರ ಪ್ರಕಾಶನವು ಶನಿವಾರ ಆಯೋಜಿಸಿದ್ದ `ಕನ್ನಡದ ಮಣ್ಣಲ್ಲಿ ಮಹಾತ್ಮನ ಜೀವನಗು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸತ್ಯ, ಅಹಿಂಸೆಯ ದಾರಿಯಲ್ಲಿ ಸಾಗಿದರೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೇಶಪ್ರೇಮದ ಜತೆಗೆ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ನಾನು ರಕ್ತಸಂಬಂಧದಿಂದ ಮಾತ್ರ ಗಾಂಧೀಜಿಯ ಮೊಮ್ಮಗಳು. ಆದರೆ, ಈ ದೇಶದ ಪ್ರಜೆಗಳೆಲ್ಲರೂ ಮಾನಸಿಕವಾಗಿ ಗಾಂಧೀಜಿಯ ಮೊಮ್ಮಕ್ಕಳಾಗಿದ್ದಾರೆ. ಹೀಗಾಗಿ ಗಾಂಧೀಜಿಯ ಮೌಲ್ಯಗಳು ಎಲ್ಲರಿಗೂ ಸೇರಿದಂಥವು ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಗಾಂಧೀಜಿಯ ಬಗ್ಗೆ ಮಾತನಾಡುವ ಅರ್ಹತೆ ರಾಜಕಾರಣಿಗಳಿಗಿಲ್ಲ. ಗಾಂಧೀಜಿಯವರ ತತ್ವ ಆದರ್ಶಗಳಿಗೆ ವಿರುದ್ಧವಾಗಿ ಇಂದಿನ ಸಮಾಜ ಸಾಗುತ್ತಿದೆ ಎಂದು ಅವರು ವಿಷಾದಿಸಿದರು.