ಆಕ್ರಮಣ ನಿರೋಧಕ್ಕೆ ಭಾರತದ ಸಿದ್ಧತೆ ನಿಲ್ಲದು
ಗೌಹಾತಿ, ಡಿ. 5 - ಭಾರತದ ವಿರುದ್ಧ ಚೀಣ ಎಸಗಿರುವ ಆಕ್ರಮಣವೂ `ನೀಫಾ', ಅಸ್ಸಾಮ್, ಭಾರತಗಳಿಗೇ ಅಲ್ಲದೆ ಇಡೀ ವಿಶ್ವಕ್ಕೇ ಒಂದು ಸಮಸ್ಯೆಯಂತಿದೆಯೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ತಿಳಿಸಿದರು.
`ನಮ್ಮ ಗಡಿಯಲ್ಲಿ ನಡೆದಿರುವುದು ಒಂದು ಐತಿಹಾಸಿಕ ವಿಷಯವಾಗಿದೆ. ಆದ ಕಾರಣ ಇಡೀ ವಿಶ್ವದ ಗಮನ ನಮ್ಮ ಮೇಲೆ ಕೇಂದ್ರೀಕೃತವಾಗಿದೆ ವಿಶ್ವ ಇತಿಹಾಸದಲ್ಲಿ ಇದೊಂದು ಪರ್ವಕಾಲ' ಎಂದೂ ನೆಹರೂರವರು ಭಾರಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.