ಚಾಮರಾಜನಗರ: `ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನಿರಂತರವಾಗಿ ಜನಪರ ಕಾರ್ಯಕ್ರಮ ರೂಪಿಸಲು ವಿಶೇಷ ದತ್ತಿ ಸ್ಥಾಪಿಸಲಾಗುವುದು~ ಎಂದು ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎಂ. ಸ್ವಾಮಿ ಹೇಳಿದರು.
ನಗರದ ಸಿದ್ದಮಲ್ಲೇಶ್ವರ ಮಠದ ಆವರಣದಲ್ಲಿ ಭಾನುವಾರ ನಡೆದ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘ, ತಾಲ್ಲೂಕು ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮೂರು ಸಹಕಾರ ಸಂಘಗಳನ್ನು ಒಂದೇ ಸೂರಿನಡಿ ಸ್ಥಾಪಿಸುವುದರೊಂದಿಗೆ ನಿರಂತರವಾಗಿ ವೀರಶೈವ ಬಾಂಧವರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗುವುದು. ಸಮಾಜ ಬಾಂಧವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಸಂಘದ ಉದ್ದೇಶ. ಈ ನಿಟ್ಟಿನಲ್ಲಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಲಸ ಮಾಡುತ್ತಿದೆ ಎಂದರು.
ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಲ್. ದೇವಣ್ಣ ಮಾತನಾಡಿ, ಸಂಘದಿಂದ ನಿವೇಶನ ಹಂಚಲು ಎ್ಲ್ಲಲ ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಮರಿಯಾಲದ ಸಮೀಪ ಜಮೀನು ಖರೀದಿಸಿ ನಿವೇಶನವನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಹಣ ಪಾವತಿ ಮಾಡಿರುವ ಸದಸ್ಯರಿಗೆ ಶೀಘ್ರವೇ ನಿವೇಶನ ಹಂಚಿಕೆ ಮಾಡಲಾ ಗುವುದು ಎಂದರು.
ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ. ಶಶಿಧರ್ ಮಾತ ನಾಡಿ, ಸಂಘದಿಂದ ಎ್ಲ್ಲಲ ಸದಸ್ಯರಿಗೂ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರ ಸದುಪಯೋಗ ಪಡೆದವರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಬೇಕು. ಇದರಿಂದ ಇತರರಿಗೂ ಸೌಲಭ್ಯ ಕಲ್ಪಿಸಲು ಅನು ಕೂಲವಾಗಲಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಶಿವಬಸವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪಿ. ಬಸಪ್ಪ, ದುಂಡುಮಾದಪ್ಪ, ನಾಗಭೂಷಣ್, ಶಿವಕುಮಾರ್, ಪರಮೇಶ್, ಪ್ರಕಾಶ್, ಮಾದಲಾಂಬಿಕ, ಸಿದ್ದಮಲ್ಲಪ್ಪ, ರಮೇಶ್, ಮಹದೇವ ಸ್ವಾಮಿ ಇತರರು ಹಾಜರಿದ್ದರು.