ಜಮ್ಮು/ಶ್ರೀನಗರ (ಪಿಟಿಐ/ಐಎಎನ್ಎಸ್): ಗಡಿ ಭದ್ರತಾ ಪಡೆಯ ಶಿಬಿರದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದಾಗ ಸೈನಿಕರು ಗುಂಡು ಹಾರಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ರಂಬಾನ್ ಜಿಲ್ಲೆಯಲ್ಲಿ ಪ್ರಾರ್ಥನಾಮಂದಿರವೊಂದನ್ನು ಯೋಧರು ಅಪವಿತ್ರಗೊಳಿಸಿದರು ಹಾಗೂ ಧಾರ್ಮಿಕ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಿ ಸಾವಿರಾರು ಜನರಿದ್ದ ಗುಂಪು ಬಿಎಸ್ಎಫ್ ಯೋಧರ ಶಿಬಿರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇದರಿಂದ ಯೋಧರು ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಅನಧಿಕೃತ ಮೂಲಗಳು ಮೃತರ ಸಂಖ್ಯೆಯನ್ನು 4 ಎಂದು ಹೇಳಿವೆ. ಗಾಯಗೊಂಡವರಲ್ಲಿ ಬಿಎಸ್ಎಫ್ ಯೋಧರೂ ಸೇರಿದ್ದಾರೆ ಎನ್ನಲಾಗಿದೆ.