ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಸ್‌ಎಸ್ ತಂಡಗಳಿಗೆ ಪ್ರಶಸ್ತಿ

ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ
Last Updated 3 ಏಪ್ರಿಲ್ 2013, 5:59 IST
ಅಕ್ಷರ ಗಾತ್ರ

ಧಾರವಾಡ: ನಗರದ ಎಸ್‌ಡಿಎಂ ತಾಂತ್ರಿಕ ಕಾಲೇಜಿನಲ್ಲಿ ಈಚೆಗೆ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಧಾರವಾಡದ ಜೆಎಸ್‌ಎಸ್ ಕಾಲೇಜು ಪುರುಷ ಹಾಗೂ ಮಹಿಳೆಯರ ತಂಡಗಳು ಪ್ರಶಸ್ತಿ ತನ್ನದಾಗಿಸಿಕೊಂಡವು.

ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಜೆಎಸ್‌ಎಸ್ ಕಾಲೇಜು ತಂಡ 25-19, 25-21 ನೇರ ಸೆಟ್‌ಗಳಿಂದ ತುಮಕೂರಿನ  ಎಸ್‌ಐಟಿ ಕಾಲೇಜು ತಂಡವನ್ನು ಮಣಿಸಿತು.  ಈ ಮೂಲಕ 15 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎಸ್‌ಐಟಿ ಕಾಲೇಜು ತಂಡ ರೂ 10 ಸಾವಿರ ನಗದು, ಪ್ರಶಸ್ತಿ ಮತ್ತು ಟ್ರೋಫಿಯನ್ನು ಪಡೆಯಿತು.

ಮಹಿಳೆಯರ ವಿಭಾಗ ಫೈನಲ್‌ನಲ್ಲಿ ಜೆಎಸ್‌ಎಸ್ ತಂಡ 25-16, 25-20 ಅಂತರದಿಂದ ತುಮಕೂರಿನ ಎಸ್‌ಐಟಿ ತಂಡವನ್ನು ಮಣಿಸಿತು. ಜೆಎಸ್‌ಎಸ್ ಕಾಲೇಜು ರೂ. 10 ಸಾವಿರ ನಗದು, ಟ್ರೋಫಿ ಪಡೆದರೆ, ಎಸ್‌ಐಟಿ ಕಾಲೇಜು ರೂ 7 ಸಾವಿರ ನಗದು, ಹಾಗೂ ಪ್ರಶಸ್ತಿ ಗಳಿಸಿತು.

ಎಸ್‌ಡಿಎಂ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಮೋಹನಕುಮಾರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಡಾ.ಎ.ಜಿ.ಬುಜರ್ಕೆ ಹಾಗೂ ಖಾಲಿದ್‌ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT