ಶಾಲಾ ಮುಖ್ಯೋಪಾಧ್ಯಾಯ ಕೆ.ಎನ್.ಲೋಕರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕರಾದ ಪಿ.ಎಸ್.ವಿದ್ಯಾನಂದ ಕುಮಾರ್, ಪವನಂಜಯ, ಇಕೊ ಕ್ಲಬ್ ಸಂಚಾಲಕ ಜಿನರಾಜೇಂದ್ರ, ಸಹನಾ ಇದ್ದರು. ಜೈವಿಕ ಇಂಧನದ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಇನ್ಸ್ಪೈಯರ್ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಸೌಜನ್ಯ ಜೈನ್ ಹಾಗೂ ಇನ್ಸ್ಪೈಯರ್ ವಿದ್ಯಾ ರ್ಥಿಗಳಾದ ಆಶ್ರಿತಾ ಜೈನ್, ನಿಷ್ಮಾ ಜೈನ್ ಅವರನ್ನು ಅಭಿನಂದಿ ಸಲಾಯಿತು.