ಹೈದರಾಬಾದ್ (ಪಿಟಿಐ): ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮತ್ತು ಬಿಜೆಪಿ ನಡುವಣ ಮೈತ್ರಿಗೆ ಕುತ್ತಾಗಿ ಕಾಡಿದ್ದ ಬಿಕ್ಕಟ್ಟು ಕೊನೆಗೊಂಡಿದೆ. ಸೀಟು ಹಂಚಿಕೆ ಸೂತ್ರದ ಭಾಗವಾಗಿ ಬಿಜೆಪಿಗೆ ನೀಡಲಾಗಿದ್ದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಇಚ್ಚಾಪುರ ಕ್ಷೇತ್ರವನ್ನು ಟಿಡಿಪಿಗೆ ಬಿಟ್ಟುಕೊಡಲು ಬಿಜೆಪಿ ಒಪ್ಪುವುದರೊಂದಿಗೆ ಬಿಕ್ಕಟ್ಟು ಪರಿಹಾರವಾಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವಡೇಕರ್, ಆಂಧ್ರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಕಂಭಪತಿ ಹರಿಬಾಬು, ಟಿಡಿಪಿ ಸಂಸದ ವೈ. ಸತ್ಯನಾರಾಯಣ ಚೌಧರಿ ಮುಂತಾದವರು ಬಿಜೆಪಿಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರ ನಿವಾಸದಲ್ಲಿ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಿಕೊಂಡರು.