`ಸೋನಿಯಾ ಗಾಂಧಿ ಪ್ರಧಾನಿಯಾದರೆ ತಲೆ ಬೋಳಿಸಿಕೊಂಡು ಬಿಳಿ ಸೀರೆ ಉಡುತ್ತೇನೆ~ ಎಂದು ಘೋಷಿಸಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡಿದ್ದ, `ಪ್ರಧಾನಿ ಪಟ್ಟ~ದ ಮೇಲೆ ಕಣ್ಣಿಟ್ಟಿರುವ ಭಾರಿ ಮಹತ್ವಾಕಾಂಕ್ಷಿ ಸುಷ್ಮಾ ಸ್ವರಾಜ್ ಇದೀಗ ಬಳ್ಳಾರಿಯ ಶ್ರೀರಾಮುಲು - ರೆಡ್ಡಿ ತ್ರಯರನ್ನು ನಡುನೀರಿನಲ್ಲಿ ಕೈಬಿಟ್ಟು ಅವರನ್ನು ರಾಜಕೀಯವಾಗಿ ತಬ್ಬಲಿಯನ್ನಾಗಿಸಿದ್ದಾರೆ.
ಕೆಟ್ಟ ಮಕ್ಕಳು ಇರಬಹುದು. ಆದರೆ ಕೆಟ್ಟ ತಾಯಿ ಇರಲು ಹೇಗೆ ಸಾಧ್ಯ? ಹೀಗಾಗಿ `ನಮ್ಮ ರಾಜಕೀಯ ಮತ್ತು ವೈಯಕ್ತಿಕ ಏಳ್ಗೆಗೆ ತಾಯಿ ಸುಷ್ಮಾ ಸ್ವರಾಜ್ ಅವರೇ ಕಾರಣ. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದೇವೆ~ ಎಂದು ಶ್ರೀರಾಮುಲು ಸುಷ್ಮಾ ತಾಯಿಯ ಮಹಿಮೆ ಕೊಂಡಾಡಿದ್ದಾರೆ! ಸತ್ಯಮೇವ ಜಯತೆ!