ಬ್ಯಾಂಕಾಕ್ (ಪಿಟಿಐ): ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಥಾಯ್ಲೆಂಡ್ನಲ್ಲಿ ಸರ್ಕಾರ ಬದಲಾವಣೆ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿರುವ ನಾಯಕರಿಗೆ ವೇದಿಕೆ ಒದಗಿಸಿಕೊಡಲು ಸೇನೆ ಮುಂದಾಗಿದೆ.
ಆದರೆ ಸೇನೆ ಪ್ರತಿಭಟನಾಕಾರರ ಪರ ನಿಲ್ಲಲಿದೆಯೇ ಎಂಬ ನಿರ್ಧಾರವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಸೇನೆ ರಚಿಸಿರುವ ಹೊಸ ವೇದಿಕೆಯಲ್ಲಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಸಂಸದರು, ಶಿಕ್ಷಣ ತಜ್ಞರು ಇದ್ದಾರೆ.
ಪ್ರತಿಭಟನಾಕಾರರ ನೇತೃತ್ವ ವಹಿಸಿರುವ ಸುಥೆಪ್ ತಾಗ್ಸುಬಾನ್, ಪ್ರಧಾನಿ ಯಿಂಗ್ಲುಕ್ ಶಿನವಾತ್ರ ಅಧಿಕಾರದಿಂದ ಕೆಳಗಿಳಿಯಬೇಕು ಹಾಗೂ ಚುನಾವಣೆಗೆ ಮೊದಲು ಮಧ್ಯಂತರ ಸರ್ಕಾರ ರಚನೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.