ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷ ಅಧಿಕಾರಿಗಳು ಇಂದಿಗೂ ಸ್ಮರಣೀಯರು

ಅಭಿನಂದನಾ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ಮನದಾಳದ ಮಾತು
Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ನಾಲ್ಕೂವರೆ ವರ್ಷದ ಸುಸ್ಥಿರ ಆಡಳಿತಕ್ಕೆ ಅಂದಿನ ಪ್ರಾಮಾಣಿಕ ಅಧಿಕಾರಿಗಳು ಕಾರಣರು. ಅವರಲ್ಲಿ ಎಂ.ಕೆ.­ಶಂಕರ­ಲಿಂಗೇ­ಗೌಡ ಅವರು ಪ್ರಮುಖರು’ ಎಂದು ಕೇಂದ್ರದ ಮಾಜಿ ಸಚಿವ ಎಸ್‌.ಎಂ.ಕೃಷ್ಣ ಹೇಳಿದರು.

ಎಂ.ಕೆ. ಶಂಕರಲಿಂಗೇಗೌಡ ಅಭಿ­ನಂದನಾ ಸಮಿತಿಯು ನಗರದಲ್ಲಿ ಸೋಮ­ವಾರ ಆಯೋಜಿಸಿದ್ದ ಶಂಕರ ಲಿಂಗೇಗೌಡ  ಅಭಿನಂದನಾ ಸಮಾ­ರಂಭ­ದಲ್ಲಿ ಅವರು ಮಾತನಾಡಿದರು.

‘ದಕ್ಷ, ನಿಷ್ಪಕ್ಷಪಾತ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಶಂಕರಲಿಂಗೇಗೌಡ ಅವರು ಯಾವುದೇ ಹುದ್ದೆಯಲ್ಲಿರಲಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಸಂವೇದನಾಶೀಲರಾಗಿ ಆಲಿಸಿ, ಪರಿಹರಿ­ಸುವ ಕಾರ್ಯವನ್ನು ಮಾಡಿದ್ದಾರೆ’ ಎಂದರು.

‘ಬೆಂಗಳೂರು–ಮೈಸೂರು ಹೆದ್ದಾರಿ ಯೋಜನೆಯು ನನ್ನ ಕನಸಿನ ಕೂಸಾ­ಗಿತ್ತು. ಅದನ್ನು ಸಾಕಾರರೂಪದಲ್ಲಿ ತಂದವರು ಶಂಕರಲಿಂಗೇಗೌಡ ಹಾಗೂ ಕಂಬಳಿ ಎಂಬ ಪ್ರಾಮಾಣಿಕ ಅಧಿಕಾರಿ­ಗಳು. ಆ ರಸ್ತೆಯಲ್ಲಿ ನಾನು ಸಂಚರಿಸು­ವಾಗ ಇಂದಿಗೂ ಅವರನ್ನು ನೆನಪಿಸಿ ಕೊಳ್ಳುತ್ತೇನೆ’ ಎಂದು  ಹೇಳಿದರು.

‘ವಿಕಾಸ ಸೌಧದ ಪರಿಕಲ್ಪನೆ ಬಂದು ಅದು ಸಾಕಾರ ರೂಪು ಹೊಂದಲು, ಮತ್ತು ಅದರ ಹೆಸರು ವಿಕಾಸ ಸೌಧ  ಎಂದು ಇಡಿ ಎಂದು ಸೂಚಿಸಿದವರು ಶಂಕರಲಿಂಗೇಗೌಡ ಅವರು ’ ಎಂದರು.

ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಮಾತನಾಡಿ, ‘ಗಾಂಧಿಭವನವನ್ನು ಸುಂದರಗೊಳಿಸಿ, ಅದಕ್ಕೆ ಒಂದು ಸ್ಥಾನವನ್ನು ಕಲ್ಪಿಸಿದ­ವರು ಶಂಕರಲಿಂಗೇಗೌಡ ಅವರು. ಅವರು ತಮ್ಮ ಕೆಲಸವನ್ನು ಸೇವೆ­ಯೆಂದೇ ಪರಿಗಣಿಸಿ ಮಾಡಿದವರು’ ಎಂದರು. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT