ಶ್ಲಾಘನಾರ್ಹ ಕಾರ್ಯ
ನೈಸರ್ಗಿಕ ಕೃಷಿಯ ಬಗ್ಗೆ ಪ್ರತಿವಾರವೂ ಉತ್ತಮ ಲೇಖನ ಮೂಡಿ ಬರುತ್ತಿದೆ. ರಾಸಾಯನಿಕಗಳ ಸಿಂಪಡನೆಗೆ ಸಾಲಸೋಲ ಮಾಡಿ ಬೆಳೆಯೂ ಬಾರದೆ ಹಲವು ರೈತರು ಸೋತು ಹೋಗಿದ್ದಾರೆ. ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಅಲ್ಪ ಖರ್ಚಿನಲ್ಲಿಯೇ ನಿಸರ್ಗದಲ್ಲಿ ಸಿಗುವ ಸಾಮಗ್ರಿ ಬಳಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಬಹುದು ಎಂಬ ಬಗ್ಗೆ ಯಶಸ್ವಿ ರೈತರ ಉದಾಹರಣೆ ಕೊಟ್ಟು ತಿಳಿಸಿಕೊಡುತ್ತಿರುವ `ಕರ್ನಾಟಕ ದರ್ಶನ'ದ ಕಾರ್ಯ ಶ್ಲಾಘನಾರ್ಹ. ರೈತರಲ್ಲಿ ಇದು ಆತ್ಮವಿಶ್ವಾಸ ಮೂಡಿಸಿದೆ.
ಹನುಮಂತೇಗೌಡ, ಗೌರಿಬಿದನೂರು
ಬಿ.ಎಸ್.ರಮೇಶ್, ಬೆಂಗಳೂರು
ಆತಿಫ್ ಬಿ, ಮೊಳಕಾಲ್ಮೂರು