ನವದೆಹಲಿ (ಐಎಎನ್ಎಸ್): ಮಹಾರಾಷ್ಟ್ರದ ದಾಭೋಲ್ನಿಂದ ಬೆಂಗಳೂರಿಗೆ ಅನಿಲ ಪೂರೈಕೆ ಮಾಡುವ ರೂ.4,500 ಕೋಟಿ ವೆಚ್ಚದ ಕೊಳವೆ ಮಾರ್ಗ ಯೋಜನೆಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಮಂಗಳವಾರ ಉದ್ಘಾಟಿಸಿದರು.
ಸರ್ಕಾರಿ ಸ್ವಾಮ್ಯದ ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಜಿಎಐಎಲ್ ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಜಂಟಿಯಾಗಿ ಆಯೋಜಿಸಿದ್ದ 8ನೇ ಏಷ್ಯಾ ಅನಿಲ ಸಹಭಾಗಿತ್ವ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಈ ಯೋಜನೆಯನ್ನು ದೇಶಕ್ಕೆ ಸರ್ಮಪಿಸಿದರು.
ದಿನವೊಂದಕ್ಕೆ 16 ದಶಲಕ್ಷ ಘನ ಅಡಿ ನೈಸರ್ಗಿಕ ಅನಿಲದಿಂದ 3,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
19 ತಿಂಗಳಲ್ಲಿ ಪೂರ್ಣಗೊಂಡ ಈ ಯೋಜನೆಯ ಮಾರ್ಗವು ದಾಭೋಲ್ನಿಂದ ಬೆಳಗಾವಿ, ಧಾರವಾಡ, ಗದಗ, ಬೆಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ ಮೂಲಕವಾಗಿ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಪ್ರದೇಶಗಳನ್ನು ಸಂಪರ್ಕಿಸಿದೆ.