ಬೆಂಗಳೂರು: `ದೇಶಿಯ ಆಹಾರ ಪದ್ದತಿಯು ಆರೋಗ್ಯ ಪಾಲನೆಗೆ ಸಹಕಾರಿಯಾಗಿದೆ~ ಎಂದು ಆಯುರ್ವೇದ ತಜ್ಞ ಡಾ.ಪಿ.ಸತ್ಯನಾರಾಯಣ ತಿಳಿಸಿದರು.
ಮಿಥಿಕ್ ಸೊಸೈಟಿಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಧರ್ಮ ಸೇವಾ ಧುರೀಣ ಕೆ.ಟಿ.ಅಪ್ಪಣ್ಣ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಹಾರ ಪದ್ಧತಿಗಳು ಮತ್ತು ಆರೋಗ್ಯ ಪಾಲನೆ ಕುರಿತು ಮಾತನಾಡಿದ ಅವರು, `ಪ್ರಾಚೀನ ಕಾಲದಿಂದಲೂ ದೇಶಿಯ ಮೂಲಿಕೆಗಳನ್ನು ಆಹಾರ ಪದ್ದತಿಯಲ್ಲಿ ಬಳಸುವ ಕ್ರಮ ಜಾರಿಯಲ್ಲಿದೆ. ಇದರಿಂದ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು~ ಎಂದರು.
`ಬೆಳ್ಳುಳ್ಳಿಯ ರಸದಿಂದ ಕಿವಿಗೆ ಬಿಟ್ಟುಕೊಂಡಾಗ ಕಿವಿ ನೋವು ವಾಸಿಯಾಗುವುದು. ದಾಸವಾಳವನ್ನು ತಲೆಗೆ ಹಾಕಿದಾಗ ತಂಪಾಗುವುದು. ಮೆಂತ್ಯ, ಜೀರಿಗೆ, ಕಾಳು ಮೆಣಸನ್ನು ರಸ ಮಾಡಿ ಅದನ್ನು ಬಳಸುವುದರಿಂದ ವಾತ ಸಂಬಂಧಿ ರೋಗಗಳು ಕಡಿಮೆಯಾಗುವುದು. ಇಂತಹ ಚಿಕಿತ್ಸೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು~ ಎಂದರು. ಕಾರ್ಯಕ್ರಮದಲ್ಲಿ ದಿ.ಮಿಥಿಕ್ ಸೊಸೈಟಿ ಅಧ್ಯಕ್ಷ ಡಾ.ಎಂ.ಕೆ.ಎಲ್.ಎನ್. ಶಾಸ್ತ್ರಿ ಉಪಸ್ಥಿತರಿದ್ದರು.