ಈಗಾಗಲೇ ತೀವ್ರವಾಗಿ ಕಾಡುತ್ತಿರುವ ಹತ್ತು ರಾಜ್ಯಗಳನ್ನೂ ಮೀರಿ ನಕ್ಸಲ್ ಸಮಸ್ಯೆ ಪಂಜಾಬ್, ಈಶಾನ್ಯ ಪ್ರಾಂತ್ಯ ಹಾಗೂ ದಕ್ಷಿಣದ ಕೆಲವು ರಾಜ್ಯಗಳಿಗೂ ಹರಡುತ್ತಿರುವ ಬಗ್ಗೆ ಆಳವಾದ ತನಿಖೆ ನಡೆಸುವ ಸಲುವಾಗಿ ಎಲ್ಲಾ ರಾಜ್ಯಗಳೂ ತಮ್ಮಲ್ಲಿನ ನಕ್ಸಲ್ ಸಂಬಂಧಿ ಸೂಕ್ಷ್ಮ ಪ್ರಕರಣಗಳನ್ನು ಎನ್ಐಎಗೆ ವರ್ಗಾಯಿಸಲಿವೆ.
ಮುಂಬೈ ದಾಳಿಯ ಬಳಿಕ ಭಯೋತ್ಪಾದನಾ ಪ್ರಕರಣಗಳ ತನಿಖೆಗಾಗಿ ಎನ್ಐಎಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ.