ರಂಗಭೂಮಿ ಚಲನಶೀಲ. ಅದರಲ್ಲೂ ಹವ್ಯಾಸಿ ರಂಗಭೂಮಿ ನಿರಂತರ ಚಟುವಟಿಕೆಗಳ ಆಗರ. ಹೀಗಾಗಿಯೇ ರಂಗಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಈ ನಿಟ್ಟಿನಲ್ಲಿ ಹಲವಾರು ರಂಗತಂಡಗಳು ರಂಗ ಪ್ರಯೋಗಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಇವುಗಳಲ್ಲಿ ಸಂಜಯ ನಗರದ ರಂಗಾಭರಣ ಕಲಾಕೇಂದ್ರವು ಒಂದು.
ಎರಡು ದಶಕಗಳಿಂದ ಅನೇಕ ರಂಗಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಈ ಕೇಂದ್ರವು ನಡೆಸಿದ `ರಂಗಾಭರಣ ಹಾಸ್ಯ ನಾಟಕೋತ್ಸವ~ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಯಶಸ್ವಿಯಾಯಿತು.
ಐದು ದಿನಗಳ ಈ ಉತ್ಸವದಲ್ಲಿ ಗೆಳೆಯರ ಬಳಗ ತಂಡದಿಂದ `ಗೋಕರ್ಣದ ಗೌಡಶಾನಿ (ನಿರ್ದೇಶನ: ಅಶೋಕ ಬಾದರದಿನ್ನಿ, ರಚನೆ: ಚಂದ್ರಶೇಖರ ಪಾಟೀಲ್), ರಂಗ ಮಿತ್ರರು ತಂಡದಿಂದ `ಮದ್ವೆ ಮದ್ವೆ~, ನಾಟ್ಯರಾಣಿ ಶಾಂತಲಾ ಕನ್ನಡ ಬಳಗ ತಂಡದಿಂದ ಪಳೆಂಕರರು, ರಂಗಾಭರಣ ತಂಡದದಿಂದ `ಸನ್ಮಾನ ಸುಖ~ ಹಾಗೂ ರೂಪಾಂತರ ತಂಡದಿಂದ `ಗಲ್ಬಸ್ಕಿ~ ನಾಟಕಗಳು ಪ್ರದರ್ಶನಗೊಂಡವು.
ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕೆಂಪೇಗೌಡ ಪ್ರಶಸ್ತಿ ಪಡೆದ ಎ.ಎಸ್. ಮಹೇಶ್ವರಿ ಅವರನ್ನು ಸನ್ಮಾನಿಸಲಾಯಿತು.