ಬೆಂಗಳೂರು: ದಕ್ಷಿಣ ಭಾರತದ ಅತಿದೊಡ್ಡ ಅಂತರರಾಜ್ಯ ಶಾಲಾ ಚರ್ಚಾ ಸ್ಪರ್ಧೆ `ವರ್ಬ್ಯಾಟಲ್ ಸೌತ್~ ಫೈನಲ್ ಇದೇ 25ರಂದು ನಡೆಯಲಿದೆ.
ಪುದುಚೇರಿ, ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈನ ಪ್ರಾದೇಶಿಕ ವಲಯಗಳಿಂದ ಆಗಮಿಸಿರುವ 9 ತಂಡಗಳು ಫೈನಲ್ನಲ್ಲಿ ಸೆಣಸಲಿವೆ.
ವರ್ಬ್ಯಾಟಲ್ ಸೌತ್ ಫೈನಲ್ನಲ್ಲಿ ಗೆದ್ದ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ವಿಜೇತ ತಂಡವನ್ನು ತರಬೇತಿಗೊಳಿಸಿದ ಶಿಕ್ಷಕರಿಗೆ `ಮೆಂಟರ್~ ಬಹುಮಾನವನ್ನು ನೀಡಲಾಗುವುದು. ಫೈನಲ್ ಸ್ಪರ್ಧೆಯು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದೆ.
ವರ್ಬ್ಯಾಟಲ್ನ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಹಲವು ವರ್ಷಗಳಿಂದ ರೂ. 12 ಲಕ್ಷ ಬಹುಮಾನ ನೀಡುತ್ತ ಬಂದಿದೆ. ಪತ್ರಕರ್ತ ದೀಪಕ್ ತಿಮ್ಮಯ್ಯ ಅವರು ಫೈನಲ್ ಸ್ಪರ್ಧೆಗಳ ತೀರ್ಪುಗಾರರಾಗಲಿದ್ದಾರೆ.