ಅಬುಜಾ (ಪಿಟಿಐ): ಒಬ್ಬ ಭಾರತೀಯ ಸೇರಿದಂತೆ 180 ಜನರ ಸಾವಿಗೆ ಕಾರಣವಾದ ಭಯೋತ್ಪಾದನಾ ದಾಳಿ ನಡೆದ ನೈಜೀರಿಯಾದ ಕನೊ ನಗರಕ್ಕೆ ರಾಷ್ಟ್ರದ ಅಧ್ಯಕ್ಷ ಗುಡ್ಲಕ್ ಜೊನಾಥನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಇಂತಹ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದಾಗಿಯೂ ಘೋಷಿಸಿದರು.
ಏತನ್ಮಧ್ಯೆ, ನೈಜೀರಿಯಾದ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ರಾಜಕಾರಣಿಗಳು ಕನೊ ನಗರದಲ್ಲಿನ ಮಸೀದಿಯೊಂದರಲ್ಲಿ ಸೋಮವಾರ ಸೇರಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.