ಸುವರ್ಣ ವಿಧಾನಸೌಧ: `ಬೆಂಗಳೂರು ನಗರದಲ್ಲಿ ಸರ್ಕಾರಿ ನೌಕರರಿಗಾಗಿ ಲೋಕೋಪಯೋಗಿ ಇಲಾಖೆ 2,490 ವಸತಿ ಗೃಹಗಳನ್ನು ನಿರ್ಮಿಸಿದ್ದು, ಇಲಾಖೆಗೆ 5,408 ನೌಕರರು ಬೇಡಿಕೆ ಸಲ್ಲಿಸಿದ್ದಾರೆ' ಎಂದು ಇಲಾಖೆ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಕಾಂಗ್ರೆಸ್ನ ಕೆ.ಗೋವಿಂದರಾಜು ಪ್ರಶ್ನೆಗೆ ಅವರು ಉತ್ತರಿಸಿದರು. ವಸತಿ ಗೃಹಗಳು ಖಾಲಿಯಾದ ತಕ್ಷಣವೇ ಜೇಷ್ಠತೆ ಅನುಸಾರ ನೌಕರರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು. ಹೊಸ ವಸತಿ ಗೃಹ ನಿರ್ಮಾಣ ಮಾಡಲು ರೂ 189 ಕೋಟಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದ ಅವರು, 20 ಕೋಟಿ ಮೊತ್ತದ ಕಾಮಗಾರಿಗೆ ಆಗಲೇ ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜೀವನ್ಭೀಮಾನಗರದ ವಸತಿ ಗೃಹಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೋವಿಂದರಾಜು ಅವರು ಆಗ್ರಹಿಸಿದರು.