ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪರಿಸರಸ್ನೇಹಿ ಮನೆ ನಿರ್ಮಿಸಿ'

Last Updated 7 ಡಿಸೆಂಬರ್ 2012, 7:04 IST
ಅಕ್ಷರ ಗಾತ್ರ

ಮೈಸೂರು: `ಪರಿಸರ ಸ್ನೇಹಿ ಹಾಗೂ ಕಳ್ಳತನಕ್ಕೆ ಆಸ್ಪದ ನೀಡದಂತಹ ಮನೆಗಳನ್ನು ನಿರ್ಮಾಣ ಮಾಡಬೇಕು' ಎಂದು ನಗರ ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್ ಕರೆ ನೀಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಮೈ-  ಬಿಲ್ಡ್-12 ಐದು ದಿನಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ರಾಜಧಾನಿ ಬೆಂಗಳೂರಿನಲ್ಲಿ ಕಿಷ್ಕಿಂಧೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿರುವುದರಿಂದ ಉಸಿರುಗಟ್ಟಿಸುವ ವಾತಾವರಣ ಇದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ದೊಡ್ಡದಾದ ರಸ್ತೆಗಳನ್ನು ಬಿಟ್ಟು ಮುಂದಾಲೋಚನೆ ಇಟ್ಟುಕೊಂಡು ಮನೆಗಳನ್ನು ನಿರ್ಮಾಣ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ತೊಂದರೆ ಅನುಭವಿಸುವುದನ್ನು ತಪ್ಪಿಸಬಹುದು. ಮೈಸೂರು ನಗರ ಸುಂದರ ವಾಗಿರುವಂತೆ ನೋಡಿಕೊಳ್ಳಬೇಕು' ಎಂದು ಹೇಳಿದರು.

`ಗುಂಪು ಮನೆಗಳನ್ನು ನಿರ್ಮಾಣ ಮಾಡುವಾಗ ಕಿಟಕಿ-ಬಾಗಿಲುಗಳ ಬಗ್ಗೆ ಎಚ್ಚರ ವಹಿಸಬೇಕು. ಕಳ್ಳತನಕ್ಕೆ ಆಸ್ಪದ ನೀಡುವಂತೆ ಇರಬಾರದು. ಕಡಿಮೆ ಅವಧಿಯಲ್ಲಿ ಮನೆ ನಿರ್ಮಾಣ ಮಾಡುವುದರಿಂದ ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡ ಬಹುದು.

ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಸಂಘ 20 ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಮನೆ ಕಟ್ಟಿಕೊಟ್ಟಿದೆ. ಸುರಕ್ಷಿತ ಮನೆಗಳನ್ನು ನಿರ್ಮಾಣ ಮಾಡುವ ಕುರಿತು ಕಟ್ಟಡ ನಿರ್ಮಾಣಕಾರರ ಸಭೆಯನ್ನು ಶೀಘ್ರವೇ ಕರೆದು ಚರ್ಚಿಸಲಾಗುವುದು' ಎಂದು ತಿಳಿಸಿದರು.

ಮೈ-ಬಿಲ್ಡ್ ಅಧ್ಯಕ್ಷ ವಿ.ಆರ್.ನಯದ್ರುವ ಮಾತನಾಡಿ, `ಮೈ-ಬಿಲ್ಡ್ ವಸ್ತುಪ್ರದರ್ಶನ ಡಿ.10 ರವರೆಗೆ ನಡೆಯಲಿದೆ. ಒಂದು ಮನೆ ಕಟ್ಟಲು ಏನೇನು ಬೇಕು ಎಲ್ಲ ವಸ್ತುಗಳು ಪ್ರದರ್ಶನದಲ್ಲಿ ಇವೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಮಳಿಗೆಗಳನ್ನು ಹಾಕಲು ಅವಕಾಶ ನೀಡಿವೆ. ಈ ಬಾರಿ ಒಟ್ಟು 170 ಮಳಿಗೆಗಳು ಇವೆ. ಸಾರ್ವಜನಿಕರು ವಸ್ತುಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು.

ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯ ಮೈಸೂರು ಘಟಕ ಅಧ್ಯಕ್ಷ ಎ.ವಿ.ಶ್ರೀಧರ್, ಘಟಕದ ಮಾಜಿ ಅಧ್ಯಕ್ಷರಾದ ಎನ್.ಎಸ್. ನಂದಕುಮಾರ್, ಶ್ರೀರಾಮ್, ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಕ್ರೆಡಯ್ ಸಂಸ್ಥೆ ಮೈಸೂರು ಘಟಕ ಅಧ್ಯಕ್ಷ ಎಂ.ಬಿ.ನಾಗಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT