18 ತಿಂಗಳ ನನ್ನ ಅಧಿಕಾರ ಅವಧಿಯಲ್ಲಿ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಅಂದಾಜು ಒಟ್ಟು ರೂ. 14 ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ, ಇದರಲ್ಲಿ ಸಂತೆ ಕಟ್ಟೆ, ಸಮುದಾಯ ಭವನ ನಿರ್ಮಾಣ, ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಸೋಲಾರ್ ವಿದ್ಯುತ್ ಉಪಕರಣಗಳ ಅಳವಡಿಕೆ ಕಾರ್ಯ ನಡೆಯುತ್ತಿವೆ ಎಂದರು.
ಬಡವರ, ದೀನದಲಿತರ ನೊಂದವರ ಧ್ವನಿಯಾಗಿ ಅವರ ಕಷ್ಟ ಸುಖಗಳಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಆಶ್ರಯ, ಅಂಬೇಡ್ಕರ, ಇಂದಿರಾ ಆವಾಜ್ ವಸತಿ ಯೋಜನೆಗಳು ಮತ್ತು ಸರಕಾರದ ಎಲ್ಲ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ಸಿಗುವಂತಾಗಲು ಸದಾ ಕ್ರೀಯಾಶೀಲನಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಸಪ್ಪ ಔರಸಂಗ, ಬಸವರಾಜ ಚೌಡಪ್ಪಗೋಳ, ಬಸಪ್ಪ ಬಳೂರಗಿ, ಸಂಗು ಹುಲ್ಯಾಳ, ದುಂಡಪ್ಪ ಕೋಠಾರಿ, ಕಲ್ಲಪ್ಪ ಮೇಲಗಿರಿ, ವಿಜಕುಮಾರ ನೀಲವಾಣಿ, ಉಮೇಶ ಅಮಾಸಿ, ಪರಶುರಾಮ ಬೀಳಗಿ, ಅನಿಲ ಆಸಂಗಿ, ವಿನೋದ ಕಲ್ಯಾಣಿ, ಅಶೋಕ ಜಿಡ್ಡಿಬಾಗಿಲು, ರಾಮಣ್ಣ ಸೊನ್ನದ, ಸಿದ್ದು ಗೊಳಸಂಗಿ, ಸಿದ್ದರಾಮ ಮೇಲಗಿರಿ, ವಿಜಯ ವಡ್ಡರ, ಶ್ರಿಶೈಲ ಹಡಪದ, ಪ್ರಮುಖರು ಉಪಸ್ಥಿತರಿದ್ದರು. ರುದ್ರಯ್ಯ ಮಠಪತಿ ಪೂಜಾ ನೆರವೇರಿಸಿದರು.