ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಸದಾಶಿವರಾಯರ ಸ್ಮರಣೆ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಪೇಜಾವರ ಸದಾಶಿವರಾಯರು ತಮ್ಮ ಗದ್ಯ, ಪದ್ಯ, ನಾಟಕಗಳಲ್ಲಿ ವಿಶಿಷ್ಟ ಛಾಪು ಮೂಡಿಸಿ ಇಂದಿಗೂ ಜನಜನಿತವಾಗಿದ್ದಾರೆ' ಎಂದು ವಿಮರ್ಶಕ ಎಸ್.ಆರ್.ವಿಜಯಶಂಕರ ಹೇಳಿದರು.

ಸುಚಿತ್ರ ಕಲಾಕೇಂದ್ರದಲ್ಲಿ ಶನಿವಾರ ನಡೆದ ಪೇಜಾವರ ಸದಾಶಿವರಾಯರ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.

`ಅವರು ಬದುಕಿದ್ದು 27 ವರ್ಷಗಳಾದರೂ, ವಿಶಿಷ್ಟ ಪ್ರಯೋಗಕ್ಕೆ ಒಡ್ಡಿಕೊಂಡಿದ್ದ ಅವರ ಕಾವ್ಯಗಳು ಇಂದಿಗೂ ತನ್ನ ಆಸಕ್ತಿಯನ್ನು ಉಳಿಸಿಕೊಂಡಿವೆ. ಅವರ ಕಾವ್ಯ, ಗದ್ಯ ಮತ್ತು ನಾಟಕಗಳು ಇಂದಿಗೂ ಪ್ರಸ್ತುತವಾಗಿವೆ' ಎಂದರು.

ಲೇಖಕ ಡಾ.ನಾ. ದಾಮೋದರ ಶೆಟ್ಟಿ ಅವರು ಮಾತನಾಡಿ, `ಏಕೀಕರಣದ ಪರಿಕಲ್ಪನೆ ಸದಾಶಿವರಾಯರ ಕೃತಿಗಳಲ್ಲಿ ಆಗಲೇ ವ್ಯಕ್ತವಾಗಿತ್ತು. ಅವರ ಬೀದಿಗೆ ಇಳಿದ ನಾರಿ ನಾಟಕವು ಗ್ರಾಮೀಣ ಮತ್ತು ನಗರ ಸಂಸ್ಕೃತಿಯ ಘರ್ಷಣೆಗಳನ್ನು ಬಿಂಬಿಸುತ್ತದೆ' ಎಂದು ಹೇಳಿದರು.

`ದಕ್ಷಿಣ ಕನ್ನಡ  ಜಿಲ್ಲೆಯ ವಿಶಿಷ್ಟ ಭಾಷಾ ಸೊಗಡು ಅವರ ನಾಟಕ ಮತ್ತು ಗದ್ಯಗಳಲ್ಲಿ ಕಂಡುಬರುತ್ತವೆ. ಇದರಿಂದಲೇ ವಿಶಿಷ್ಟವಾದ ಸೊಗಡನ್ನು ಹೊಂದಿರುವ ಅವರ ಕೃತಿಗಳು   ಜನರನ್ನು ಇಂದಿಗೂ ಹಿಡಿದಿಡುತ್ತವೆ' ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT