ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶ್ ನಡೆದು ಹೋದ ದಾರಿ

Last Updated 9 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

1940: ಜುಲೈ 11 ನಾರಾಯಣ ದೇವನ ಕೆರೆಯಲ್ಲಿ ಜನನ,  ನಾರಾಯಣ ದೇವನಕೆರೆ, ಹೊಸಪೇಟೆ, ಬಳ್ಳಾರಿ, ಬೆಂಗಳೂರಿನಲ್ಲಿ ಅಭ್ಯಾಸ. ಮತ್ತು ಮುಂಬೈನಲ್ಲಿ ಕಾನೂನು ಪದವಿ ಅಧ್ಯಯನ.

1963: ರುದ್ರಾಂಬ ಅವರೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಿವಾಹ ಹಾಗೂ ವಕೀಲ ವೃತ್ತಿ ಆರಂಭ.

1964: ಹಡಗಲಿಯಲ್ಲಿ ವಕೀಲರಾಗಿ ಸೇವೆ ಹಾಗೂ ರಂಗಭಾರತಿಯ ಸ್ಥಾಪನೆ.

1967: ಸಮಾಜವಾದಿ ಚಳವಳಿಯಲ್ಲಿ ಭಾಗಿ.

1973: ಬಳ್ಳಾರಿ ಜಿಲ್ಲಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ. ಪ್ರಕಾಶ್ ನೇತೃತ್ವದಲ್ಲಿ  ಸಂಡೂರು ಹೋರಾಟ ಸಮಿತಿ ಸ್ಥಾಪನೆ

ಮಾ.23: ಸಂಡೂರು ರಾಜ ಮನೆತನದ ಶೋಷಣೆಯ ವಿರುದ್ಧ  ಮುಖ್ಯಮಂತ್ರಿ ದೇವರಾಜ  ಅರಸು ಅವರಿಗೆ ಮನವಿ ಸಲ್ಲಿಕೆ.

1971- 81: ಹಡಗಲಿ ಜಿ.ಬಿ.ಆರ್. ಕಾಲೇಜು ಅಧ್ಯಕ್ಷರಾಗಿ ಸೇವೆ.

1973: ಹಡಗಲಿಯಲ್ಲಿ ಅಖಿಲ ಕರ್ನಾಟಕ ಸೋಷಲಿಸ್ಟ್ ಸಮ್ಮೇಳನದ ಆಯೋಜನೆ.

1975: ತುರ್ತು ಪರಿಸ್ಥಿತಿ ವಿರುದ್ಧ ನಡೆದ ಚಳುವಳಿಯಲ್ಲಿ ಸಕ್ರಿಯ ಪಾತ್ರ.

1978: ವಿಧಾನಸಭಾ ಚುನಾವಣೆಗೆ ಜನತಾ ಪಕ್ಷದಿಂದ ಹೂವಿನಹಡಗಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಫರ್ಧೆ- ಸೋಲು.

1979: ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಸ್ಪರ್ಧೆ- ಸೋಲು.

1983: ವಿಧಾನಸಭೆಗೆ ಮತ್ತೆ ಹೂವಿನಹಡಗಲಿ ಕ್ಷೇತ್ರದಿಂದ ಸ್ಫರ್ಧೆ- ಜಯ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ.  ಸಾರಿಗೆ ಮತ್ತು ಕಾರ್ಮಿಕ ಖಾತೆಗಳ ಸಮರ್ಥ ನಿರ್ವಹಣೆ 

1984: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಪರ ಸ್ಫರ್ಧೆ-  ಸೋಲು.

1985: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ್ತೆ ಗೆಲುವು.

1987: ಜನತಾದಳದ ಅಧ್ಯಕ್ಷರಾಗಿ ಆಯ್ಕೆ.

1989: ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.

1994: ವಿಧಾನಸಭೆಗೆ ಸ್ಫರ್ಧೆ- ಗೆಲುವು. ದೇವೇಗೌಡರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ.

1995: ಹೂವಿನ ಹಡಗಲಿಯಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ಸಂಘಟನೆ.

1999 ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.

2000: ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆ. ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಣೆ ಹಾಗೂ ಹಡಗಲಿಯಲ್ಲಿ ರಂಗ ಚೈತ್ರೋತ್ಸವ ಸಂಘಟನೆ.

2004: ವಿಧಾನಸಭೆಗೆ ಸ್ಪರ್ಧೆ- ಗೆಲುವು. ಕಾಂಗ್ರೆಸ್- ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ  ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವ ಸ್ಥಾನ.

2005: ಆಗಸ್ಟ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ. ಧರ್ಮಸಿಂಗ್ ಅವರ  ಸಂಪುಟದಲ್ಲಿ ಉಪ ಮುಖ್ಯ ಮಂತ್ರಿಯಾಗಿ ನೇಮಕ .

2006: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಹಾಗೂ ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಣೆ.

2008: ಕಾಂಗ್ರೆಸ್ ಸೇರ್ಪಡೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT