1940: ಜುಲೈ 11 ನಾರಾಯಣ ದೇವನ ಕೆರೆಯಲ್ಲಿ ಜನನ, ನಾರಾಯಣ ದೇವನಕೆರೆ, ಹೊಸಪೇಟೆ, ಬಳ್ಳಾರಿ, ಬೆಂಗಳೂರಿನಲ್ಲಿ ಅಭ್ಯಾಸ. ಮತ್ತು ಮುಂಬೈನಲ್ಲಿ ಕಾನೂನು ಪದವಿ ಅಧ್ಯಯನ.
1963: ರುದ್ರಾಂಬ ಅವರೊಂದಿಗೆ ಹಗರಿಬೊಮ್ಮನಹಳ್ಳಿಯಲ್ಲಿ ವಿವಾಹ ಹಾಗೂ ವಕೀಲ ವೃತ್ತಿ ಆರಂಭ.
1964: ಹಡಗಲಿಯಲ್ಲಿ ವಕೀಲರಾಗಿ ಸೇವೆ ಹಾಗೂ ರಂಗಭಾರತಿಯ ಸ್ಥಾಪನೆ.
1967: ಸಮಾಜವಾದಿ ಚಳವಳಿಯಲ್ಲಿ ಭಾಗಿ.
1973: ಬಳ್ಳಾರಿ ಜಿಲ್ಲಾ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ. ಪ್ರಕಾಶ್ ನೇತೃತ್ವದಲ್ಲಿ ಸಂಡೂರು ಹೋರಾಟ ಸಮಿತಿ ಸ್ಥಾಪನೆ
ಮಾ.23: ಸಂಡೂರು ರಾಜ ಮನೆತನದ ಶೋಷಣೆಯ ವಿರುದ್ಧ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮನವಿ ಸಲ್ಲಿಕೆ.
1971- 81: ಹಡಗಲಿ ಜಿ.ಬಿ.ಆರ್. ಕಾಲೇಜು ಅಧ್ಯಕ್ಷರಾಗಿ ಸೇವೆ.
1973: ಹಡಗಲಿಯಲ್ಲಿ ಅಖಿಲ ಕರ್ನಾಟಕ ಸೋಷಲಿಸ್ಟ್ ಸಮ್ಮೇಳನದ ಆಯೋಜನೆ.
1975: ತುರ್ತು ಪರಿಸ್ಥಿತಿ ವಿರುದ್ಧ ನಡೆದ ಚಳುವಳಿಯಲ್ಲಿ ಸಕ್ರಿಯ ಪಾತ್ರ.
1978: ವಿಧಾನಸಭಾ ಚುನಾವಣೆಗೆ ಜನತಾ ಪಕ್ಷದಿಂದ ಹೂವಿನಹಡಗಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಫರ್ಧೆ- ಸೋಲು.
1979: ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ಗೆ ಸ್ಪರ್ಧೆ- ಸೋಲು.
1983: ವಿಧಾನಸಭೆಗೆ ಮತ್ತೆ ಹೂವಿನಹಡಗಲಿ ಕ್ಷೇತ್ರದಿಂದ ಸ್ಫರ್ಧೆ- ಜಯ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ. ಸಾರಿಗೆ ಮತ್ತು ಕಾರ್ಮಿಕ ಖಾತೆಗಳ ಸಮರ್ಥ ನಿರ್ವಹಣೆ
1984: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಪರ ಸ್ಫರ್ಧೆ- ಸೋಲು.
1985: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ್ತೆ ಗೆಲುವು.
1987: ಜನತಾದಳದ ಅಧ್ಯಕ್ಷರಾಗಿ ಆಯ್ಕೆ.
1989: ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.
1994: ವಿಧಾನಸಭೆಗೆ ಸ್ಫರ್ಧೆ- ಗೆಲುವು. ದೇವೇಗೌಡರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ.
1995: ಹೂವಿನ ಹಡಗಲಿಯಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ಸಂಘಟನೆ.
1999 ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.
2000: ವಿಧಾನ ಪರಿಷತ್ಗೆ ಅವಿರೋಧ ಆಯ್ಕೆ. ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಣೆ ಹಾಗೂ ಹಡಗಲಿಯಲ್ಲಿ ರಂಗ ಚೈತ್ರೋತ್ಸವ ಸಂಘಟನೆ.
2004: ವಿಧಾನಸಭೆಗೆ ಸ್ಪರ್ಧೆ- ಗೆಲುವು. ಕಾಂಗ್ರೆಸ್- ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವ ಸ್ಥಾನ.
2005: ಆಗಸ್ಟ್ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ. ಧರ್ಮಸಿಂಗ್ ಅವರ ಸಂಪುಟದಲ್ಲಿ ಉಪ ಮುಖ್ಯ ಮಂತ್ರಿಯಾಗಿ ನೇಮಕ .
2006: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಹಾಗೂ ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಣೆ.
2008: ಕಾಂಗ್ರೆಸ್ ಸೇರ್ಪಡೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ಧೆ- ಸೋಲು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.