ಮಂಗಳವಾರ, 10–12–1963
ಗಡಿರೇಖೆ ಉಲ್ಲಂಘನೆ
ನವದೆಹಲಿ, ಡಿ. 9– ಕದನಸ್ತಂಭನ ರೇಖೆಗೆ ಭಾರತದ ಕಡೆಗಿರುವ ಚಕ್ನಾಟ್ ಬಗ್ಗೆ ಪಾಕಿಸ್ತಾನವು ಉಲ್ಲಂಘನೆ ಮಾಡಿದೆ ಎಂದೂ, ಭಾರತವು ಉಲ್ಲಂಘನೆ ಮಾಡಿಲ್ಲವೆಂದೂ ಕಾಶ್ಮೀರದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ಮುಖ್ಯ ಸೇನಾ ವೀಕ್ಷಕರು ತೀರ್ಪು ಕೊಟ್ಟಿದ್ದಾರೆ.
ಸಮ್ಮೇಳನದ ಸಲಹೆ
ಬೆಂಗಳೂರು, ಡಿ. 9 – ಸರ್ಕಾರ ಆರ್ಥಿಕ ನೆರವು ನೀಡುವುದಾದರೆ ಮುಂದಿನ ಶಿಕ್ಷಣ ವರ್ಷದಿಂದ ಹೈಸ್ಕೂಲುಗಳಲ್ಲಿ 10ನೇ ಸ್ಟಾಂಡರ್ಡ್ನ್ನು ಪ್ರಾರಂಭಿಸಬಹುದೆಂದು ಇಂದು ವಿಧಾನಸೌಧದಲ್ಲಿ ನಡೆದ ಶಾಲೆಗಳ ಮುಖ್ಯೋಪಾಧ್ಯಾಯರುಗಳ ಸಮ್ಮೇಳನವು ಅಭಿಪ್ರಾಯಪಟ್ಟಿದೆ.